ಹಸುವಿನಿಂದ ಬೋಳುತಲೆ ನೆಕ್ಕಿಸಿ ಕೊಂಡರೆ….!

ಹಸುವಿನಿಂದ ಬೋಳುತಲೆ ನೆಕ್ಕಿಸಿ ಕೊಂಡರೆ….!

ಇದೇನಿದು ಹಸುವಿಗೂ ಬೋಳುತಲೆಗೂ ಎಲ್ಲಿಂದೆಲ್ಲಿಯ ಸಂಬಂಧ? ಹೌದು ನಿಕಟ ಸಂಬಂಧವಿದೆ ಎಂದು ಕೊಲಂಬಿಯಾ ದೇಶದ ವಿಜ್ಞಾನಿ ‘ಫೇರಿರಾ’ ಹೇಳುತ್ತಾರೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ೪೦ ವರ್ಷದಾಟುತ್ತಿದ್ದಂತೆ ಒಂದೊಂದೇ ಕೂದಲುಗಳು ಉದುರಲಾರಂಬಿಸುತ್ತವೆ. ೫೦ ವರ್ಷಕ್ಕಾಗಲೇ ತಾಮ್ರದ ಚಂಬಿನಂತಾಗಿ ಬಿಡುತ್ತದೆ ತಲೆ. ಇಂಥಹ ಅಸಂಖ್ಯೆ ತಲೆಗಳ ಸಮಸ್ಯೆಗಳನ್ನು ಪರಿಹರಿಸಲು ಅಂದರೆ ಬೋಳುತಲೆಯಲ್ಲಿ ಪುನಃ ನೈಸರ್ಗಿಕವಾಗಿ ಕೂದಲು ಬೆಳೆಯಲು ವಿಜ್ಞಾನಿ ಪೆರೀರಾ ಅವರು ಒಂದು ಔಷಧಿಯನ್ನು ಕಂಡು ಹಿಡಿದ್ದಾರೆ. ತಲೆಗೆ ಹಚ್ಚಲೆಂದು ಒಂದು ತೈಲವನ್ನು ತಯಾರಿಸಿದ್ದು ಅದನ್ನು ಬೋಳು ತಲೆಗೆ ಸವರಿ ನಂತರ ದಿನವೂ ಒಂದು ಹಸುವಿನಿಂದ ತಲೆಯನ್ನು ನೆಕ್ಕಿಸಿಕೊಳ್ಳಬೇಕು. ಹಸುವಿನ ಜೊಲ್ಲಿನಲಿ ಕೆಲವು ಗುಣಕಾರಕ ಔಷಧಿಗಳಿವೆ. ತಲೆಗೆ ಹಚ್ಚಿಕೊಂಡ ಎಣ್ಣೆ ಹಾಗೂ ಹಸುವಿನ ಜೊಲ್ಲು ಸೇರಿದರೆ ಕೆಂಪು ರಾಸಾಯನಿಕ ಮಾರ್ಪಾಡುಗಳು ಉಂಟಾಗುತ್ತವೆ. ಹೀಗಾಗಿ ಬೋಳು ತಲೆಯಲ್ಲಿ ಮತ್ತೆ ನೈಸರ್ಗಿಕವಾದ ಕೂದಲುಗಳು ಬೆಳೆಯಲಾರಂಬಿಸುತ್ತವೆ. ಇವರ ಈ ವಿಶಿಷ್ಟ ಚಿಕಿತ್ಸಾ ಪದ್ಧತಿಯನ್ನು ಪಡೆದುಕೊಂಡ ಹಲವರು ಉತ್ತಮ ಫಲಿತಾಂಶವನ್ನು ಕಂಡುಕೊಂಡಿದ್ದಾರೆ. ಇದು ವಿಸ್ಮಯವಾದರೂ ಸತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಯಸದೆ ಬರುವುದು
Next post ಇಲ್ಲಿ ಸಲ್ಲುವುದೆ ಅಲ್ಲಿಯೂ ಸಲ್ಲುವುದೆ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys